ಕೆ.ಎಲ್.ಇಸಂಸ್ಥೆಯ ಮಲಗೌಡ ಪಾಟೀಲ್ ವಾಣಿಜ್ಯ ಮಹಾವಿದ್ಯಾಲಯ ರಾಯಬಾಗ್ ಬಿ.ಕಾಂ. ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ವಿವಿಧ ಘಟಕಗಳ ಕಾರ್ಯಕ್ರಮ ದಿನಾಂಕ 21.07.2026 ರಂದು ನಮ್ಮ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ಸುನಿಲ್ ಶಿಂಧೆ. ಎಚ್ಓಡಿ ಆಫ್ ಎಂ ಸಿ .ಎ.ಡಿಪಾರ್ಟ್ಮೆಂಟ್ ಕೆ ಎಲ್ ಈ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಚಿಕ್ಕೋಡಿ. ರವರು ಈ ಸ್ವಾಗತ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿದ್ಯಾರ್ಥಿಗಳು ಭವಿಷ್ಯವನ್ನು ಹೇಗೆ ಕಟ್ಟಿಕೊಳ್ಳಬೇಕು ಮತ್ತು ವಿದ್ಯಾರ್ಥಿಗಳು ತಮ್ಮ ತಮ್ಮ ಗುರಿಗಳನ್ನು ಈ ಕ್ಷಣದಿಂದಲೇ ನಿರ್ಧರಿಸುವುದು ಉತ್ತಮ ಅದಕ್ಕೆ ಬೇಕಾದ ಪ್ರಯತ್ನವನ್ನು ಈಗಿಂದಲೇ ಪ್ರಾರಂಭಿಸಬೇಕು ಎಂದು ಅದರ ಜೊತೆ ವಾಣಿಜ್ಯ ವಿಭಾಗಕ್ಕೆ ಇರುವ ಅವಕಾಶಗಳ ಬಗ್ಗೆ ನೈಜ ಘಟನೆಗಳನ್ನು ನೋಡಿದರ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು ಈ ಕಾರ್ಯಕ್ರಮದ ಗಣಾಧ್ಯಕ್ಷತೆಯನ್ನು ನಮ್ಮ ಮಹಾವಿದ್ಯಾಲಯದ ಪ್ರಾಚಾರ್ಯರ ಆರ್ .ಕೆ .ಪಾಟೀಲ್ ಸರ್ ಅವರು ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣದಲ್ಲಿ ಮಹಾವಿದ್ಯಾಲಯ ವಿದ್ಯಾರ್ಥಿಗಳಿಗೆ ನಿರಂತರವಾಗಿ ವಿದ್ಯಾಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಮಾರ್ಗದರ್ಶ ನೀಡುವುದರ ಜೊತೆಗೆ ನಮ್ಮ ಮಹಾವಿದ್ಯಾಲಯದಿಂದ ಶಿಕ್ಷಣ ಪಡೆದು ಸಾಧನಗೈದ ವಿದ್ಯಾರ್ಥಿಗಳ ನೆನೆಸಿಕೊಳ್ಳುವುದರ ಜೊತೆಗೆ ಮುಂದಿನ ಭವಿಷ್ಯದಲ್ಲಿ ಪ್ರಸಕ್ತ ಸಾಲಿನ ಎಲ್ಲ ವಿದ್ಯಾರ್ಥಿಗಳು ಸಾಧನೆಗೈವಂತೆ ಹಾರೈಸಿದರು ಇವರುಗಳೊಂದಿಗೆ ಈ ಕಾರ್ಯಕ್ರಮದಲ್ಲಿ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಎಂ. ಎಂ. ನಿಶಾನ್ದಾರ್ .ಶ್ರೀ. ವಿ.ಪಿ .ಪಾಟೀಲ್ ಮತ್ತು ಶ್ರೀ ಎಲ್ ಬಿ.ಪಾಟೀಲ್ ಉಪಸ್ಥಿತರಿದ್ದರು ಅದೇ ರೀತಿ ಈ ಕಾರ್ಯಕ್ರಮದಲ್ಲಿ ಕ್ರೀಡೆಯ ವಿಭಾಗದ ಸಂಯೋಜಕರಾದ ಶ್ರೀ ಎಸ್.ಎ .ಕವಟಕೊಪ್ಪ .ವಾಣಿಜ್ಯ ವಿಭಾಗದ ಸಂಯೋಜಕರಾದಶ್ರೀ ಎಂ. ಎಸ್. ಹಂಜೆ .ಸಾಂಸ್ಕೃತಿಕ ವಿಭಾಗದ ಸಂಯೋಜಕರಾದ ಶ್ರೀ. ವಿ. ಎಸ್. ಪೂಜಾರಿ ಹಾಗೂ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು ಈ ಕಾರ್ಯಕ್ರಮವನ್ನು ಶ್ರೀ ವಿ .ಎ. ಮಂಡಕಿ ಮಂಡಳಿ ನಿರೂಪಿಸಿದರು. ಶ್ರೀ ಎಂ. ಎಸ್ . ಹಂಜೆ ವಂದಿಸಿದರು.